ನವಂಬರ್‌ನಲ್ಲಿ `ವಂಶೋದ್ಧಾರಕ` ಚಿತ್ರ ತೆರೆಗೆ
Posted date: 12 Mon, Oct 2015 – 02:27:37 PM

 ಓಂಶ್ರೀಕಾಳಿಕಾಮಾತ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ವಂಶೋದ್ಧಾರಕ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ನವಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
ಅರವಿಂದ್(ರಥಸಪ್ತಮಿ) ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರವನ್ನು ಆದಿತ್ಯ ಚಿಕ್ಕಣ್ಣ ಅವರು ನಿರ್ದೇಶಿಸಿದ್ದಾರೆ. ಚಂದ್ರಾಚಾರ್‌ಕುಮಾರ್ ಕಥೆ ಬರೆದಿದ್ದಾರೆ. ವಿ.ಮನೋಹರ್ ಸಂಗೀತ ನಿರ್ದೇಶನ, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್ - ಹರಿಣಿ, ಕಲೈ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಡಾ||ಬಿ.ಎಲ್.ವೇಣು ಸಂಭಾಷಣೆ ಬರೆದಿದ್ದಾರೆ.
   ವಿಜಯರಾಘವೇಂದ್ರ, ಮೇಘನರಾಜ್, ಲಕ್ಷ್ಮೀ(ಜ್ಯೂಲಿ), ವಿನಯಾಪ್ರಸಾದ್, ವೀಣಾಸುಂದರ್, ಶ್ರೀನಿವಾಸಮೂರ್ತಿ, ರಂಗಾಯಣ ರಘು, ಸಾಧುಕೋಕಿಲ, ನವೀನ್‌ಕೃಷ್ಣ, ಸತ್ಯಜಿತ್, ಸಂಕೇತ್ ಕಾಶಿ, ಬಿರಾದಾರ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ದನ್, ಮೋಹನ್ ಜುನೇಜ, ಶಂಖನಾದ ಅರವಿಂದ್, ಜಯರಾಮ್, ಮಾ.ಚಂದ್ರು, ಶಿವಕುಮಾರ್, ಮೈಸೂರು ರಮಾನಂದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed